Posts

Showing posts from 2010

ಪ್ರೀತಿಯ ಮೇಷ್ಟ್ರು ಇನ್ನಿಲ್ಲ

Image
ಕನ್ನಡದ ಹಿರಿಯ ಸಾಹಿತ್ಯ ವಿಮರ್ಶಕ ಕಿ.ರಂ. ನಾಗರಾಜ್ (64) ಬಸವನಗುಡಿ ನಿವಾಸದಲ್ಲಿ ಶನಿವಾರ ರಾತ್ರಿ ನಿಧನರಾಗಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ಸಲ್ಲಿಸಿರುವ ನಾಗರಾಜ್ ನಿಧನದಿಂದ ಸಾಹಿತ್ಯ ಲೋಕ ಆಘಾತಕ್ಕೊಳಗಾಗಿದೆ. ಕಳೆದ ರಾತ್ರಿ ಹೃದಯಾಘಾತಕ್ಕೊಳಗಾದ ನಾಗರಾಜ್ ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ. 64 ವರ್ಷದ ನಾಗರಾಜ್ ಮೂರು ಪುತ್ರಿಯರನ್ನು ಆಗಲಿದ್ದಾರೆ. ನಾಗರಾಜ್ ಪಾರ್ಥಿವ ಶರೀರವನ್ನು ಬಸವನಗುಡಿ ನಿವಾಸದ ಬಳಿ ಅಂತಿಮ ದರ್ಶನಕ್ಕಿಡಲಾಗಿದ್ದು, ಬನಶಂಕರಿ ಚಿತಾಗಾರದಲ್ಲಿ ಭಾನುವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ನಾಗರಾಜ್ ನಿಧನದಿಂದ ಸಾಹಿತ್ಯ ಲೋಕದಲ್ಲಿ ಶೂನ್ಯ ಸೃಷ್ಟಿ ಮಾಡಿದಂತಾಗಿದೆ. ನಾಗರಾಜ್ ನಿಧನಕ್ಕೆ ಅನೇಕ ಗಣ್ಯ ವ್ಯಕ್ತಿಗಳು ಮತ್ತು ಸಾಹಿತ್ಯ ಲೋಕ ಕಂಬನಿ ಮಿಡಿದಿದೆ. ಶ್ರೇಷ್ಠ ವಿಮರ್ಶಕರಾಗಿದ್ದ ನಾಗರಾಜ್ ಸಾಕಷ್ಟು ವಿದ್ಯಾರ್ಥಿ ಶಿಷ್ಯ ವರ್ಗವನ್ನು ಹೊಂದಿದ್ದರು. ಕನ್ನಡ ಸಾಹಿತ್ಯ ಶ್ರೇಷ್ಠ ವಿಮರ್ಶಕರಲ್ಲಿ ಒಬ್ಬರಾಗಿದ್ದ ಕಿ.ರಂ. ನಾಗರಾಜ್ 1943 ಡಿಸೆಂಬರ್ 5ರಂದು ಹಾಸನದ ಕಿತ್ತಾನೆಯಲ್ಲಿ ಜನಿಸಿದ್ದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿ.ಎ ಪದವಿ ಪಡೆದಿದ್ದ ಅವರು ಬೆಂಗಳೂರು ವಿ.ವಿನಲ್ಲಿ ಎಂ.ಎ.ಸ್ನಾತಕೋತ್ತರ ಪದವಿ ಪೂರೈಸ...