Posts

Showing posts from 2012

ಎಲ್ಲಾದರೂ ನೀ ನಲಿವಿಂದಿರು

ಅಲ್ಲಾದರೂ ಇರು ಇಲ್ಲಾದರೂ ಇರು ಎಲ್ಲಾದರೂ … ನೀ ನಲಿವಿಂದಿರು ಏನಾದರೂ ಸರಿ ಎಂತಾದರೂ ಸರಿ ನನ್ನೆದೆಯಲಿ ನೀ ಸದಾ ಹಸಿರು ನಾ ನೊಂದರೂ ಸರಿ ನಾ ಬೆಂದರೂ ಸರಿ ನಿನ್ನ ನೆನಪಲೆ ನಾ ಉಳಿವೆ ಸವಿಗನಸಲಿ ನಿನ್ನ ನೆನೆಯುತ ಆ ನೆನಪೊಡನೆಯೇ ನಾ ಬೆಳೆವೆ ನಿನ್ನ ನಲಿವಿಗೆ ನನ್ನೊಲವಿಗೆ ಈ ನೆಮ್ಮದಿಯನೆ ಬಲಿ ಕೊಡುವೆ ನಿನ್ನ ಬಾಳಿಗೆ ನಾ ತೊಡಕಾದರೆ ಈ ದೇಹವನೆ ಮಣ್ಣಿಗಿಡುವೆ

ಒಂದು ಪುಟ್ಟ ಗ್ರಾಮದ ಹೂವಿನಂಥ ಕಥೆ

Image
* ಈ.ರಮೇಶ್‌  ನಿಂಬೆಮರದಹಳ್ಳಿ (ಡಿಸೆಂಬರ್‌ 26, 2012ರಂದು ವಿಜಯಕರ್ನಾಟಕದಲ್ಲಿ ಪ್ರಕಟವಾದ ಲೇಖನ) http://vijaykarnataka.indiatimes.com ಆ ಊರಿನಲ್ಲಿ ಹೊತ್ತು ಮೇಲೇರುವ ಮೊದಲೇ ಜನ ವಿರಳವಾಗುತ್ತಾರೆ. ಸದಾ ಪಿಸುಗುಟ್ಟುವ ಜಗಲಿ ಮೌನವಾಗುತ್ತದೆ. ಗಿಜಿಗುಟ್ಟುವ ಊರ ಮುಂದಿನ ಹೈಕಳ ಅಡ್ಡೆ ಖಾಲಿ ಹೊಡೆಯುತ್ತದೆ.  ಇನ್ನು ದನ ಕರುಗಳು ಕೊಟ್ಟಿಗೆ ಸೇರುವ ಗೋಧೂಳಿ ಹೊತ್ತಲ್ಲಿ ಒಂದಷ್ಟು ಧೂಳು, ಧೂಮ, ಸದ್ದು. ಆಮೇಲೆ ಮತ್ತೆ ರಸ್ತೆಗಳು ನಿರ್ಜನ.ಯಾವ ಮನೆಗೆ ಇಣುಕಿದರೂ ಹೂವಿನ ಘಮಲು. ಹರಡಿಕೊಂಡ ಹೂ ರಾಶಿ ನಡುವೆ ಯಂತ್ರದಂತೆ ಸರಸರನೆ ಹೂವು ಕಟ್ಟುವ ಕೈಗಳು. ಇದು ಶಿರಾ ತಾಲೂಕಿನ ನಿಂಬೆಮರದಹಳ್ಳಿ ಗ್ರಾಮದಲ್ಲಿ ಬೆಳಗು ಮತ್ತು ಬೈಗಿನ ಸಮಯದಲ್ಲಿ ಕಂಡುಬರುವ ದೃಶ್ಯ. ಈಗ ಆ ಊರಿನ ತುಂಬೆಲ್ಲ ಹೂವಿನ ಪರಿಮಳ. ಎಲ್ಲರ ಬಾಯಲ್ಲೂ ಹೂವಿನ ಮಾತು. ಊರಿಗೆ ಊರೇ ಈಗ ಸೇವಂತಿಗೆಯಲ್ಲಿ ಮುಳುಗಿ ಹೋಗಿದೆ. ಎಲ್ಲಿ ನೋಡಿದರೂ ಹಳದಿ ಚೆಲ್ಲಿದ ಹಾಗೆ ಕಾಣುವ ಸೇವಿಂತಿಗೆ ಹೂವಿನ ತೋಟಗಳು. ಸೇವಂತಿಗೆಯಲ್ಲಿ ಚಾಂದಿನಿ, ಬಿಳಿಹೂವು, ಬೆಳ್ಳಟ್ಟಿ, ಕರ್ನಲ್‌, ಪಚ್ಚೆ ಮುಂತಾದ ತಳಿಗಳಿವೆ. ಇವುಗಳಲ್ಲಿ ಕೆಲವು ಮಳೆಗಾಲಕ್ಕೆ ಸೂಕ್ತವಾದರೆ ಇನ್ನು ಕೆಲವು ಬೇಸಿಗೆಯ ಒಣ ಹವೆಗೆ ಸೂಕ್ತ, ಕೆಲವು 3 ತಿಂಗಳ ಬೆಳೆ ಮತ್ತೆ ಕೆಲವು 6 ತಿಂಗಳ ಬೆಳೆ. 3 ತಿಂಗಳ ಬೆಳೆಯಾದರೆ ನಾಟಿ ಮಾಡಿದ ಒಂದೂವರೆ ತಿಂಗಳಿಗೆಲ್ಲ ಆದಾಯ ಶುರು. ಮುಂದಿನ ಎರಡು ತಿಂಗಳು ನಿರಂತರ ದುಡಿಮೆ,...

ಹೃದಯದಲ್ಲಿ ಮೋದಿ ಇನ್ನೂ ’ಪ್ರಚಾರಕ’

Image
* ಶಿವ ವಿಶ್ವನಾಥನ್ * ಕನ್ನಡಕ್ಕೆ: ಈ.ರಮೇಶ್‌ ನಿಂಬೆಮರದಹಳ್ಳಿ  (ವಿಜಯಕರ್ನಾಟಕದ ಸಂಪಾದಕೀಯ ಪುಟದಲ್ಲಿ ಡಿಸೆಂಬರ್‌ 17, 2012ರಂದು ಪ್ರಕಟವಾದ ಅನುವಾದಿತ ಲೇಖನ) http://vijaykarnataka.indiatimes.com/ ಇಪ್ಪತ್ತು ವರ್ಷಗಳ ಹಿಂದೆ ಬಾಬ್ರಿ ಮಸೀದಿ ಧ್ವಂಸಗೊಂಡ ಸಂದರ್ಭದಲ್ಲಿ ಮನಶಾಸ್ತ್ರಜ್ಞ ಆಶಿಸ್ ನಂದಿ, ಅಯೋಧ್ಯೆಯ ಗ್ರಹಿಕೆ ಮತ್ತು ಸಮಸ್ಯೆಗಳ ಕುರಿತು ಅಧ್ಯಯನ ಮಾಡಲು ನಿರ್ಧರಿಸಿದರು. ನಂದಿಯವರ ಕುತೂಹಲ ಅವರನ್ನು ಮಸೀದಿ ಧ್ವಂಸದ ವಾಸ್ತವಾಂಶಗಳಾಚೆ ಕೊಂಡೊಯ್ಯಿತು. ಕೊನೆಗೆ ಅವರೇ ಹೇಳುವಂತೆ ಒಂದು ಫ್ಯಾಸಿಸ್ಟ್ ವ್ಯಕ್ತಿತ್ವವನ್ನೂ ಪರಿಚಯ ಮಾಡಿಕೊಟ್ಟಿತು. ಅವರು ಕೇವಲ ಆರ್‌ಎಸ್‌ಎಸ್‌ನ ಒಬ್ಬ ಸಾಮಾನ್ಯ 'ಪ್ರಚಾರಕ'ರಾಗಿದ್ದರು. ಆದರೂ ಅವರ ಪ್ರಜ್ಞೆ, ಅಸಮಾನತೆ ಕುರಿತಾದ ಅವರ ಗ್ರಹಿಕೆ ಮತೀಯರಿಗೆ ರೋಮಾಂಚನವನ್ನುಂಟು ಮಾಡಿತ್ತು. ಅಪ್ಪಟ ನಿರಂಕುಶಾಧಿಕಾರಿ ವ್ಯಕ್ತಿತ್ವದ ಮಾದರಿಯ ಒಬ್ಬ ವ್ಯಕ್ತಿ ದೊರೆತಿದ್ದಕ್ಕೆ ಆಶಿಸ್ ನಂದಿಗೆ ಬಹಳ ಸಂತೋಷವಾಯಿತು. ಕಟ್ಟಾ ಬಲಪಂಥೀಯರಾಗಿದ್ದ ಆ 'ಪ್ರಚಾರಕ' ಆಗಿನ್ನೂ ಅಷ್ಟು ಜನಪ್ರಿಯರಾಗಿರಲಿಲ್ಲ. ಅವರ ಹೆಸರೇ ನರೇಂದ್ರ ಮೋದಿ. ಮುಂದಿನ 10 ವರ್ಷಗಳ ಕಾಲ ಅವರ ವ್ಯಕ್ತಿತ್ವ ವಿಕಸನಗೊಳ್ಳುತ್ತಾ ಹೋಯಿತು.

ಭಾರತಕ್ಕೆ ಬಂತು ನೆಕ್ಸಸ್‌-7 : ಬೆಲೆ ಕೇವಲ 20 ಸಾವಿರ

Image
ಗೂಗಲ್‌ ಕಂಪನಿಯ ಜನಪ್ರಿಯ ನೆಕ್ಸಸ್‌ ಟ್ಯಾಬ್ಲೆಟ್‌ ಕೊನೆಗೂ ಭಾರತಕ್ಕೆ ಬಂದಿದೆ. ಇಂದಿನಿಂದ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಟ್ಯಾಬ್ಲೆಟ್‌ ಉತ್ಪಾದಕ ಆಸಸ್‌ ಕಂಪನಿ ದೃಢಪಡಿಸಿದೆ. 16 ಜಿಬಿ ಸಾಮರ್ಥ್ಯದ ನೆಕ್ಸಸ್‌ 7 ಬೆಲೆ ಕೇವಲ 19,990 ಎಂದು ಆಸಸ್‌ ಹೇಳಿದೆ. ಗೂಗಲ್‌ ಸಹಭಾಗಿತ್ವದೊಂದಿಗೆ ನೆಕ್ಸಸ್‌ ಉತ್ಪಾದಿಸಿರುವ ಆಸಸ್‌ ಕಂಪನಿ ಅಧಿಕೃತವಾಗಿ ಭಾರತದ ಮಾರುಕಟ್ಟೆಗೆ ನೆಕ್ಸಸ್‌7 ಟ್ಯಾಬ್ಲೆಟ್‌ ಬಿಟ್ಟಿಲ್ಲವಾದರೂ, ಆನ್‌ಲೈನ್‌ ಮಳಿಗೆಗಳು ಭಾರತದಲ್ಲಿ ಈಗಾಗಲೇ ಟ್ಯಾಬ್ಲೆಟ್‌ ಮಾರಾಟ ಆರಂಭಿಸಿವೆ. CNN-IBN ವರದಿ ಮಾಡಿರುವಂತೆ ಆಂಡ್ರಾಯಿಡ್‌ 4.1 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುವ ನೆಕ್ಸಸ್‌ 7 ಭಾರತದಾದ್ಯಂತ ಕ್ರೋಮ ಎಲೆಕ್ಟ್ರಾನಿಕ್‌ ಮಳಿಗೆಗಳಲ್ಲಿ ಲಭ್ಯವಾಗಲಿದೆ.

ಬಾಂಡ್ ಈಸ್ ದಿ ಬೆಸ್ಟ್... ಬಟ್ ನಾಟ್ ಆಲ್‌ವೇಸ್

Image
* ಈ.ರಮೇಶ್ ನಿಂಬೆಮರದಹಳ್ಳಿ  ನವೆಂಬರ್‌ 1ರಂದು ವಿಜಯಕರ್ನಾಟಕದ ಚಿತ್ರ ವಿಮರ್ಶೆಯಲ್ಲಿ ಪ್ರಕಟವಾದ ಲೇಖನ ಐ ಯಾಮ್ ಬಾಂಡ್... ಜೇಮ್ಸ್ ಬಾಂಡ್... ಹೀಗೆಂದು ಬಾಂಡ್ ತನ್ನ ಹೆಸರನ್ನ ಉದ್ಘರಿಸುತ್ತಲೇ ನೋಡುಗರಿಗೆ ಬಾಂಡ್ ಚಿತ್ರದ ಅಡ್ವೆಂಚರಸ್ ಜರ್ನಿಯ ಮೊದಲ ಅನುಭವ ಶುರುವಾಗುತ್ತೆ. ಟರ್ಕಿಯ ಜನನಿಭಿಡ ಮಾರುಕಟ್ಟೆ ಪ್ರದೇಶದಲ್ಲಿ ತೆರೆದುಕೊಳ್ಳುವ ಓಪನಿಂಗ್ ಸೀನ್ ಜಸ್ಟ್ ಅಮೇಝಿಂಗ್. ಭಯತ್ಪಾದಕನನ್ನು ಅಟ್ಟಿಸಿಕೊಂಡು ಮಾರುಕಟ್ಟೆಯಲ್ಲಿ ದಾಂಧಲೆ ಎಬ್ಬಿಸಿ ನುಗ್ಗುವ ಕಾರು, ಹೆಂಚು ಮನೆಗಳ ಮೇಲೆ ಓಡುವ ರೇಸಿಂಗ್ ಬೈಕ್, ನಂತರ ಓಡುವ ಗೂಡ್ಸ್ ಟೈನ್ ಮೇಲೆ ನಡೆಯುವ ಬಿಗ್ ಫೈಟ್, ಎಲ್ಲವೂ ಅದ್ಭುತ. ಇನ್ನೇನು ಬಾಂಡ್ ಗುಂಡಿಗೆ ಟೆರರಿಸ್ಟ್ ಗುಂಡಿಗೆ ಹೋಳು ಎನ್ನುವಷ್ಟರಲ್ಲಿ ಬಾಂಡ್‌ ಗುಂಡಿಗೆ ಸೀಳಿದ ಬುಲೆಟ್‌ ಆತನನ್ನು ಆಳ ಪ್ರಪಾತಕ್ಕೆ ನೂಕಿಬಿಡುತ್ತದೆ. ಇದು ನವೆಂಬರ್1ರಂದು ವಿಶ್ವದಾದ್ಯಂತ ತೆರೆ ಕಂಡ ಸ್ಕೈಫಾಲ್ ಚಿತ್ರದ ಸೈಡ್‌ರೀಲ್. ಟೈಟಲ್‌ ಕಾರ್ಡ್‌ ಆರಂಭವಾಗುತ್ತಲೇ ತೆರೆದುಕೊಳ್ಳುವ ಗ್ರಾಫಿಕ್‌ ಲೋಕ ಮುದ ನೀಡುತ್ತದೆ.

'ನಕಲಿ' ಅತ್ಯಾಚಾರ, ಅಸಲಿ 'ಹಿಂಸಾ'ಚಾರ

Image
* ಈ.ರಮೇಶ್‌ ನಿಂಬೆಮರದಹಳ್ಳಿ  ಮಹಿಳೆ, ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಸುಳ್ಳು ಅತ್ಯಾಚಾರ ಪ್ರಕರಣಗಳೂ ಹೆಚ್ಚುತ್ತಿವೆ. ಅತ್ಯಾಚಾರ ಎನ್ನುವ ಅಮಾನುಷ ಕೃತ್ಯ, ಮಹಿಳೆಯ ಆತ್ಮಘಾತಕ ಹೇಗೋ ಹಾಗೆ, ಅತ್ಯಾಚಾರ ವಿರೋಧಿ ಕಾನೂನು, ಕೆಲವರಿಗೆ ವಿರೋಧಿಗಳನ್ನು ಹಣಿಯುವ ಅಸ್ತ್ರವೂ ಆಗಿ ಪರಿಣಮಿಸಿದೆ. ಯಾವುದೇ ವ್ಯಕ್ತಿಯ ಮೇಲೆ ಸೇಡು ತೀರಿಸಿಕೊಳ್ಳಲು ಯಾವುದೇ ಮಹಿಳೆ ಬಯಸಿದರೆ, ಬಹುಶಃ 'ಅತ್ಯಾಚಾರ ಆರೋಪ'ವೆಂಬ ಅಸ್ತ್ರಕ್ಕಿಂತ ಹರಿತವಾದ ಮತ್ತೊಂದು ಅಸ್ತ್ರ ಸಿಗಲು ಸಾಧ್ಯವೇ ಇಲ್ಲ. ಅತ್ಯಾಚಾರ ಆರೋಪ ಕಾನೂನು ಮತ್ತು ಸಮಾಜದ ದೃಷ್ಟಿಯಲ್ಲಿ ಅತ್ಯಂತ ಗಂಭೀರವಾದ ದುಷ್ಕೃತ್ಯವಾಗಿರುವುದರಿಂದ, ಆರೋಪಿ ಸ್ಥಾನದಲ್ಲಿರುವ ಪುರುಷನಿಗೆ ಇದು ಭಾರಿ ಪೆಟ್ಟು ನೀಡುವುದಂತೂ ಸತ್ಯ. ಇನ್ನು ಆರೋಪ ಸಾಬೀತಾದರಂತೂ (ಸಾಬೀತಾದ ಎಲ್ಲಾ ಆರೋಪಗಳೂ ಸತ್ಯಗಳಾಗಿರಬೇಕಿಂದಿಲ್ಲ. ಅವು ಸಾಬೀತು ಮಾಡಲಾದ 'ಸತ್ಯ'ಗಳೂ ಆಗಿರಲು ಸಾಧ್ಯ.) ಕಾನೂನಿನ ಕುಣಿಕೆಗೆ ಕೊರಳೊಡ್ಡುವುದು ಅನಿವಾರ್ಯ. ಇದಕ್ಕಿಂತ ಕ್ರೂರ ಮತ್ತು ಭಯಾನಕ ಎಂದರೆ ಸಾಮಾಜಿಕ ಅಪಮಾನ. ಈ ಆರೋಪ, ಆತನ ಬದುಕನ್ನೇ ಹೊಸಕಿ ಹಾಕಿಬಿಡುತ್ತದೆ. ಒಂದು ವೇಳೆ ಆರೋಪ ಮುಕ್ತನಾಗಿ ಹೊರಬಂದರೂ 'ಅತ್ಯಾಚಾರಿ' ಪಟ್ಟ ಆತನ ಬೆನ್ನು ಬಿಡುವುದಿಲ್ಲ. ಮಾನಸಿಕ ಹಿಂಸೆಯೊಂದೇ ಜೀವನವಿಡೀ ಆತನಿಗೆ ಉಳಿಯುವ ಆಸ್ತಿ. ಮಡದಿಗೆ ದುರುಳನಾಗಿ, ಮಕ್ಕಳಿಗೆ ಬೇಡವಾಗಿ ಬದುಕು ಸವೆಸುತ...

ಬದಲಾದ ಮನಸು; ಬದಲಾದ ಯುಗಾದಿ

Image
*  ಈ . ರಮೇಶ್   ನಿಂಬೇಮರದಹಳ್ಳಿ ಮಾರ್ಚ್ ‌ 22, 2009ರಂದು  ' ವಿಜಯ   ಕರ್ನಾಟಕ ' ದ  ' ಲವಲವಿಕೆ '  ವಿಭಾಗದಲ್ಲಿ   ಪ್ರಕಟವಾದ   ಲೇಖನ  . http://vijaykarnataka.indiatimes.com ಯುಗಾದಿ ಹಿಂದೂಗಳ ಪಾಲಿಗೆ ಬಹುದೊಡ್ಡ ಹಬ್ಬ. ಇದು ಬರೀ ಹಬ್ಬ ಮಾತ್ರವಲ್ಲ. ಇಲ್ಲಿ ಹಬ್ಬಕ್ಕೂ ಮೀರಿದ ಸಂಭ್ರಮವಿದೆ. ವಿಶೇಷ ಅಡುಗೆ, ಸಿಹಿ ತಿಂಡಿ, ಹೊಸ ಬಟ್ಟೆ, ಬಹುತೇಕ ಹಬ್ಬಗಳ ಸಾಮಾನ್ಯ ಲಕ್ಷಣ. ಆದರೆ ಯುಗಾದಿ ಎಂದರೆ ಇವಿಷ್ಟು ಮಾತ್ರವಲ್ಲ. ಇಲ್ಲಿ ಘಮಘಮಿಸೋ ಹೋಳಿಗೆಯ ಸವಿರುಚಿ ಇದೆ. ಸಾಲ ಮಾಡಿಯಾದರೂ ಹೊಸ ಬಟ್ಟೆ ತೊಡಲೇಬೇಕೆಂಬ ತುಡಿತ ಇದೆ. ಹಬ್ಬಕ್ಕೂ ಮೊದಲು ವಾರಗಟ್ಟಲೆ ಸಿದ್ಧತೆ ಇದ್ದರೆ, ಹಬ್ಬದ ನಂತರ ಮತ್ತಷ್ಟು ದಿನ ಅದನ್ನು ಮೆಲುಕು ಹಾಕುವ ಗುಣವಿದೆ. ಎಲ್ಲ ಹಬ್ಬಗಳನ್ನು ಮನಷ್ಯರಷ್ಟೇ ಆಚರಿಸಿದರೆ, ಯುಗಾದಿಯನ್ನು ಪ್ರಕೃತಿಯೂ ಆಚರಿಸುತ್ತದೆ. ಹೊಸ ತಳಿರಿನ ತೋರಣದಿಂದ, ಘಮಘಮಿಸೋ ಹೂಗಳಿಂದ ಅಲಂಕಾರಗೊಂಡು, ಹಸಿರು ಸಂಭ್ರಮದ ನಡುವೆ ಹಬ್ಬ ಆಚರಿಸುತ್ತೆ. ಪ್ರಕೃತಿ, ಅತ್ಯುನ್ನತ ಸೊಬಗಿನಲ್ಲಿ ಕಾಣುವ ಅಮೋಘ ಕಾಲ ಯುಗಾದಿ. ಹಳತೆಲ್ಲ ಹೊಸತಾಗಿ ಯುಗಾದಿಯ ಆಚರಣೆ ಹಳ್ಳಿಗಳಲ್ಲಿ ವಿಶಿಷ್ಟವಾಗಿರುತ್ತದೆ. ಯುಗಾದಿ ಎಂದರೆ ಊರಿಗೆ ಊರೇ ಮೈಕೊಡವಿ ನಿಲ್ಲುತ್ತದೆ. ವಾರ್ಷಿಕ ಸ್ವಚ್ಛತಾ ಕಾರ್ಯಾಚರಣೆ ಆರಂಭವಾಗುತ್ತದೆ. ಒಣಗಿದ ಗರಿಗಳನ್ನು ಒದ್ದು ಮಲಗಿದ್ದ ಗುಡಿಸಲುಗಳು ಇದ್...