Posts

ಕನ್ನಡದಲ್ಲಿ ಹೇಳಿದ್ದನ್ನು ಸರಾಗವಾಗಿ ಬರೆದುಕೊಳ್ಳುವ 'ವಾಗಕ್ಷರ'

Image
ಈ.ರಮೇಶ್ ನಿಂಬೆಮರದಹಳ್ಳಿ ಬೆಂಗಳೂರು ramesh.eranna@timesgroup.com                     Speech-to-Text ಒತ್ತು, ಕೊಂಬು, ದೀರ್ಘಕ್ಷರಗಳಿರುವ ಕನ್ನಡದಲ್ಲಿ ಟೈಪ್ ಮಾಡುವುದು ಅಷ್ಟು ಸುಲಭವಲ್ಲ . ಹೀಗಾಗಿ ಹೇಳುವುದನ್ನು ಯಾರಾದರೂ ಟೈಪ್ ಮಾಡಿಕೊಂಡರೆ ಎಷ್ಟು ಚೆನ್ನ ಅನ್ನಿಸುವುದೂ ಸುಳ್ಳಲ್ಲ. ಅಂಥ ಆಸೆ ಈಗ ಈಡೇರಿದೆ. ನಾವು ಹೇಳಿದ್ದನ್ನು ಸರಾಗವಾಗಿ ಬರೆದು ಕೊಳ್ಳುವ ಸ್‌ಟಾವೇರ್ ಸಿದ್ಧವಾಗಿದೆ. ಅದೇ ವಾಗಕ್ಷರ. ಹೇಳಿದ್ದನ್ನು ಬರೆದುಕೊಳ್ಳುವ ಈ ಸ್‌ಟಾವೇರ್ ಅನ್ನು ಬೆಂಗಳೂರಿನಲ್ಲಿರುವ ‘ಜ್ಞಾನಿ ಇನ್ನೋವೇಷನ್ಸ್’ ಅಭಿವೃದ್ಧಿಪಡಿಸಿದೆ. ಮೊದಲು ಬಿಡುಗಡೆಯಾದ ‘ಕನ್ನಡ ವಾಯ್ಸ್ ನೋಟ್ಸ್’ ಎನ್ನುವ ಮೊಬೈಲ್ ಅಪ್ಲಿಕೇಶನ್ ಅನ್ನು ಇದೀಗ ಕನ್ನಡ ಗಣಕ ಪರಿಷತ್ತು ಕಂಪ್ಯೂಟರ್‌ಗೆ ಅಳವಡಿಸಿದೆ.  98% ನಿಖರತೆ ಇದರ ವಿಶೇಷ: ವಾಗಕ್ಷರ  ನಮ್ಮ ಮಾತುಗಳನ್ನು ಶೇ.98ರಷ್ಟು ಕರಾರುವಕ್ಕಾಗಿ ಗ್ರಹಿಸುತ್ತದೆ. ತಮ್ಮ ಎನ್‌ಎಲ್‌ಪಿ (ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್) ಎಂಜಿನ್‌ಗೆ ಕನ್ನಡದಲ್ಲಿ ವೈವಿಧ್ಯಮಯ ಧ್ವನಿ ನೀಡಿ ತರಬೇತಿ ನೀಡಿರುವುದೇ ಇದಕ್ಕೆ ಕಾರಣ ಎನ್ನುತ್ತಾರೆ ಇದನ್ನು ರೂಪಿಸಿದ ಜ್ಞಾನಿ ಇನ್ನೋವೇಷನ್ಸ್ ಕಂಪನಿಯ ಬ್ಯುಸಿನೆಸ್ ಹೆಡ್ ನರೇಂದ್ರ. ಮುಂದೆ ಕನ್ನಡ ವಿವಿಧ ಬಗೆಯ ಉಪಭಾಷೆಗಳು, ಪ್ರಾದೇಶಿಕ ಭಿನ್ನತೆಗಳನ್ನೂ ಕೂಡ ಈ ಸ್‌ಟಾವೇರ್...

ಕೃಷಿಯಲ್ಲಿ ಶುರುವಾಗಿದೆ ಕೃತಕ ಬುದ್ಧಿವಂತಿಕೆ ಕ್ರಾಂತಿ

Image
 ಮಳೆ, ಹವಾಮಾನ ಮತ್ತು ಮಣ್ಣಿನ ಗುಣಮಟ್ಟದ ಮೇಲೆ ನಿಂತಿರುವ ಭಾರತದ ಕೃಷಿಗೆ ಹಲವು ಅಡ್ಡಿ ಆತಂಕಗಳಿವೆ. ಭಾರತದ ಬಹುತೇಕ ಬೇಸಾಯ ಮಳೆಯ ಮೇಲೆ ನಿಂತಿದೆ. ಮಳೆ ಮುಗಿಲು ಸೇರಿದರೂ ಸಮಸ್ಯೆ; ಅತಿಯಾಗಿ ಸುರಿದರೂ ಅಪಾಯ. ಇದರ ನಡುವೆ ಇತ್ತೀಚಿನ ವರ್ಷಗಳಲ್ಲಿ ಕೃಷಿ ಕಾರ್ಮಿಕರ ಕೊರತೆಯೂ ಈ ಕ್ಷೇತ್ರವನ್ನು ಬಾಧಿಸುತ್ತಿದೆ. ದಶಕಗಳ ಕಾಲ ಭೂಮಿ ತಾಯಿ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ನುಂಗಿ ಬಂಜೆಯಾಗುತ್ತಿದ್ದಾಳೆ. ಇಷ್ಟೆಲ್ಲಾ ಕಷ್ಟಗಳ ನಡುವೆ ಹೇಗೋ ಒಳ್ಳೆಯ ಬೆಳೆ ತೆಗೆದರೆ ಸರಿಯಾದ ಮಾರುಕಟ್ಟೆಯಂತೂ ಸಿಗುವುದಿಲ್ಲ, ಖರ್ಚಿನ ಮೇಲೆ ಒಂದಿಷ್ಟು ಲಾಭ ನೋಡುವಷ್ಟು ಬೆಲೆ ದೊರಕುವುದು ಅಪರೂಪವೇ ಸರಿ. ಇದೆಲ್ಲದರ ನಡುವೆ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಯಂತ್ರಾಧಾರಿತ ಆಧುನಿಕ ಬೇಸಾಯದ ಕ್ರಮಗಳನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತಿದೆ. ಆದರೆ, ಈಗ ನಾವು ಕೃಷಿ ಕ್ಷೇತ್ರದಲ್ಲಿ ಹೊಸದೊಂದು ಸಂಚಲನವನ್ನು ಕಾಣುತ್ತಿದ್ದೇವೆ. ಆ ಸಂಚಲನ ಹಿಂದೆಂದೂ ನೋಡಿರದಂಥದ್ದು. ಇದು ಕೇವಲ ಆಧುನಿಕವಲ್ಲ, ಅತ್ಯಾಧುನಿಕ. ಈ ಅತ್ಯಾಧುನಿಕ ತಂತ್ರಜ್ಞಾನ ಕೃಷಿ ಕ್ಷೇತ್ರದಲ್ಲಿ ನಾವೀಗ ಎದುರಿಸುತ್ತಿರುವ ಹತ್ತು ಹಲವು ಸಮಸ್ಯೆಗಳಿಗೆ ಉತ್ತರ ಹೇಳಬಲ್ಲಂಥದ್ದು. ಅದುವೇ ಕೃಷಿ ಕ್ಷೇತ್ರದ ಕೃತಕ ಬುದ್ಧಿವಂತಿಕೆ. ಒಟ್ಟಾರೆ ವೈಜ್ಞಾನಿಕ ಮತ್ತು ತಂತ್ರಜ್ಞಾನ ಪ್ರಪಂಚದಲ್ಲಿ ಬಹುದೊಡ್ಡ ಸಂಚಲನ ಹುಟ್ಟು ಹಾಕಿರುವ ಕೃತಕ ಬುದ್ಧಿವಂತಿಕೆ ಎಂದರೆ ಆರ್ಟಿಫಿಷಿಯಲ್ ಇಂಟೆಲೆಜೆನ್ಸಿ ಈ...

2019ರಲ್ಲಿ ಬದುಕನ್ನು ಪ್ರಭಾವಿಸುವ ತಂತ್ರಜ್ಞಾನಗಳು ಯಾವು ಗೊತ್ತಾ?

Image
ತಾಂತ್ರಿಕ ಆವಿಷ್ಕಾರಗಳು ಪ್ರತಿದಿನ ಸಂಭವಿಸುತ್ತಲೇ ಇವೆ. ದಿನಕ್ಕೊಂದು, ಕ್ಷಣಕ್ಕೊಂದು ತಂತ್ರಜ್ಞಾನ ಬೆಳಕು ಕಾಣುತ್ತಲೇ ಇದೆ. ಯಾವುದೇ ತಂತ್ರಜ್ಞಾನದ ಪರಿಣಾಮಗಳನ್ನು ಪಕ್ಕಕ್ಕಿಟ್ಟು ಮಾತನಾಡುವುದಾದರೆ, ಈ ಹೊತ್ತಿನ ಸಂದರ್ಭದಲ್ಲಿ ತಂತ್ರಜ್ಞಾನ ಕ್ರಾಂತಿಯೇ ಸಂಭವಿಸುತ್ತಿದೆ. ಆದರೂ ಎಲ್ಲ ತಂತ್ರಜ್ಞಾನಗಳೂ ಜನರ ಬದುಕಿನಲ್ಲಿ ನಿಲ್ಲುವುದಿಲ್ಲ. ಕೆಲವು ಹಾಗೆ ಬಂದು ಹೀಗೆ ಮರೆಯಾಗುತ್ತವೆ. ಮತ್ತೆ ಕೆಲವು ಒಂದಷ್ಟು ಕಾಲ ಚಾಲ್ತಿಯಲ್ಲಿದ್ದು, ಬಳಿಕ ಮರೆಯಾಗುತ್ತವೆ. ಆದರೆ ಕೆಲವೇ ಕೆಲವು ತಂತ್ರಜ್ಞಾನಗಳು ಜನರ ಬದುಕಿನ ಮೇಲೆ ಅಗಾಧವಾದ ಪರಿಣಾಮವನ್ನು ಬೀರುತ್ತವೆ. ಜೊತೆಗೆ ಸಮಾಜದಲ್ಲಿ ಭಾರಿ ಪರಿವರ್ತನೆಯನ್ನು ತರುತ್ತವೆ. ಈ ವ‍ರ್ಷ ಅಂದರೆ 2018ರಲ್ಲಿ ಜಗತ್ತಿನಾದ್ಯಂತ ಹೆಚ್ಚು ಚಾಲ್ತಿಗೆ ಬಂದಿರುವ/ಬರುವ ಕೆಲವು ತಂತ್ರಜ್ಞಾನಗಳು ಹೀಗಿವೆ: 1. ಕೃತಕ ಬುದ್ದಿಮತ್ತೆ: ಕೃತಕ ಬುದ್ಧಿಮತ್ತೆ ಎನ್ನುವುದು ಇತ್ತೀಚೆಗೆ ಹೆಚ್ಚು ಕೇಳಿಬರುತ್ತಿರುವ ಪದ. ಇದನ್ನು ಸರಳವಾಗಿ ವಿವರಿಸುವುದಾದರೆ, ಯೋಚಿಸುವ ಇಲ್ಲವೇ ವಿವೇಕವುಳ್ಳ ಪ್ರೋಗ್ರಾಂ. ಕೃತಕ ಬುದ್ಧಿವಂತಿಕೆ ಎನ್ನುವುದು ಒಂದು ಪ್ರೋಗ್ರಾಂ ಆಗಿದ್ದು, ಇದು ಹೊಸದಾಗಿ ಕಲಿಯುತ್ತದೆ; ತನ್ನಲ್ಲಿರುವ ಸಮಸ್ಯೆಗಳನ್ನು ತಾನೇ ಸುಧಾರಿಸಿಕೊಳ್ಳುತ್ತದೆ; ಸಂದರ್ಭಾನುಸಾರ ವರ್ತಿಸುವುದನ್ನು ಅಭ್ಯಾಸ ಮಾಡಿಕೊಳ್ಳುತ್ತದೆ. ಒಟ್ಟಿನಲ್ಲಿ ಒಬ್ಬ ಮನುಷ್ಯ ಕಲಿಯುವ, ತಪ್ಪುಗಳನ್ನು ತಿದ್ದಿಕೊಳ್ಳುವ ಕ್ರಮದಲ್ಲೇ ಈ...

ಫೇಸ್‌ಬುಕ್‌ಕ್ಕೊಂದು ಸಭ್ಯತೆಯ ಬೇಲಿ

Image
* ರಮೇಶ್‌ ನಿಂಬೆಮರ್ದಳ್ಳಿ ಫೇ ಸ್‌ಬುಕ್‌   ಎನ್ನುವುದು ಆಧುನಿಕ ಕಾಲದ ಒಂದು ಕ್ರಾಂತಿಕಾರಿ ವಿದ್ಯಮಾನ. ಫೇಸ್‌ಬುಕ್‌ ಒಂದು ಸಾಫ್ಟ್‌ವೇರ್‌ ಅಲ್ಲ ;  ಒಂದು ವೆಬ್‌ಸೈಟ್‌ ಅಲ್ಲ. ಬದಲು , ಇದು ಭೌತಿಕ ಸಮಾಜಕ್ಕೆದುರಾಗಿ ಸೃಷ್ಟಿಯಾಗಿರುವ ಆನ್‌ಲೈನ್ ಸಮಾಜ. ಇದು ನಮ್ಮ ಸುತ್ತಮುತ್ತಲ ಇರುವ ಸಮಾಜದ ಬಿಂಬದಂತೆ ಕಂಡರೂ ಅದಕ್ಕಿಂತಲೂ ಬಿನ್ನ.   ವೈರುಧ್ಯದ ಹಲವು ಮನಸ್ಸುಗಳು ಸೇರಿ ಸಮಾಜವೆಂಬ ಸಮಷ್ಠಿ ಪ್ರಜ್ಞೆಯೊಂದು ರೂಪುಗೊಂಡಿರುವ ಹಾಗೆ ಇಲ್ಲಿಯೂ ಭಿನ್ನ ವಯೋಮಾನ , ಭಿನ್ನ ಧೋರಣೆಯ ವ್ಯಕ್ತಿಗಳಿದ್ದರೂ   ಫೇಸ್‌ಬುಕ್‌   ಎಂಬ ಸಮಾಜಕ್ಕೆ ಸಾಮೂಹಿಕ ಗುಣವೊಂದು ಪ್ರಾಪ್ತವಾಗಿದೆ. ಹೀಗಾಗಿ ಇದು ವಿಶ್ವದಾದ್ಯಂತ ಅಧ್ಯನಕಾರರಿಗೆ ವಿಷಯಗಳ ಗಣಿ ಇದ್ದಂತೆ. ಸಮಾಜಶಾಸ್ತ್ರಜ್ಞರಿಗಂತೂ ಎಷ್ಟು ಮೊಗೆದರೂ ಉಕ್ಕುತ್ತಲೇ ಇರುವ ಚಿಲುಮೆ. ಫೇಸ್ಬುಕ್ ಮೇಲೆ , ಅದರಲ್ಲಿ ಸಕ್ರಿಯವಾಗಿರುವ ಯೂಸರ್ , ಗ್ರೂಪ್ , ಕಮ್ಯುನಿಟಿಗಳ ಬಗ್ಗೆ ನೂರಾರು ಅಧ್ಯಯನಗಳು ನಡೆದಿವೆ. ಮನಶಾಸ್ತ್ರಜ್ಞರಿಗೆ ಮನುಷ್ಯನ ಸಾಮಾಜಿಕ ವರ್ತನೆಗಳ ಅಧ್ಯನಕ್ಕೆ ಇದೊಂದು ಅತ್ಯುತ್ತಮ   ಸಾಧನವಾಗಿದೆ. ವಿವಿಧ ಕ್ಷೇತ್ರದ ಚಿಂತಕರು ಫೇಸ್ಬುಕ್ , ಅದರಲ್ಲಿ ತೇಲುವ ಸಮಾಜ , ಮತ್ತದರ ಆಲೋಚ ನಾ ಕ್ರಮಗಳ ಬಗ್ಗೆ ಸಾಕಷ್ಟು ವಾಗ್ವಾದಗಳನ್ನು ನೆಡೆಸಿದ್ದಾರೆ. ತಂತ್ರಜ್ಞಾನದ ಅಪಾರ ಸಾಧ್ಯತೆಯನ್ನು ತೆರೆದಿಟ್ಟಿರುವ ಫೇಸ್ಬುಕ್ ಅದೇವೇಳೆ ತಂತ್ರಜ್ಞಾನದ ಮಿತಿ , ಅದರ ...

ಮುರಿದು ಬೀಳುತ್ತಿವೆ ಲಿವ್‌-ಇನ್‌ ಸಂಬಂಧಳು

Image
* ರಮೇಶ್‌ ನಿಂಬೆಮರ್ದಳ್ಳಿ  ಕಾಸ್ಮೋಪಾಲಿಟನ್‌ ಬೆಂಗಳೂರು ಹಲವು ವಿಸ್ಮಯ, ವಿಚಿತ್ರಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿದೆ. ಅಂತಹ ವಿಚಿತ್ರಗಳಲ್ಲಿ ತಾತ್ಕಾಲಿಕ 'ಲಿವ್‌-ಇನ್‌' ಸಂಬಂಧವೂ ಒಂದು. ಇತ್ತೀಚೆಗೆ, ಹೀಗೆ ಲಿವ್‌-ಇನ್‌ ಸಂಬಂಧಗಳು ಮುರಿದುಬೀಳುತ್ತಿರುವ ಪ್ರಕರಣ ಬೆಂಗಳೂರಿನಲ್ಲಿ ಹೆಚ್ಚುತ್ತಿವೆ. ಮದುವೆಯ ಗೋಜಲು ಬಯಸದ, ಸಂಸಾರದ ಜವಾಬ್ದಾರಿಗೆ ಒಲ್ಲೆ ಎನ್ನುವ ಆದರೆ ಸಾಂಸಾರಿಕ ಸುಖ ಬೇಕೆನ್ನುವ ಮನಸ್ಸುಗಳು 'ಲಿವ್‌-ಇನ್‌' ಸಂಬಂಧಕ್ಕೆ ಕಟ್ಟು ಬೀಳುತ್ತವೆ. ಸಾಮಾನ್ಯವಾಗಿ ಈ ತೆರನಾದ ಸಂಬಂಧಕ್ಕೆ ಹಾತೊರೆಯುವವರಲ್ಲಿ ಬಹುತೇಕ ಐಟಿ ಮತ್ತು ಬಿಪಿಓ ಕಂಪನಿಗಳಲ್ಲಿ ಕೆಲಸ ಮಾಡುವವರೇ ಆಗಿರುತ್ತಾರೆ. ಬೆಂಗಳೂರು ನಗರ ಪೊಲೀಸ್‌ ಇಲಾಖೆಯ ಕೌಟುಂಬಿಕ ಸಲಹಾ ಕೇಂದ್ರದ ಪ್ರಕಾರ, ಇಂಥ ಲಿವ್‌-ಇನ್‌ ಸಂಬಂಧಗಳು ಮುರಿದುಬೀಳುತ್ತಿರುವುದು ಹೆಚ್ಚುತ್ತಿದೆ. ಕಳೆದ 2011-2012ರ ಅವಧಿಯಲ್ಲಿ ಈ ರೀತಿ ಮುರಿದುಬಿದ್ದ ಸಂಬಂಧಗಳು 30. ಈ ಬಾರಿ ಅಂದರೆ ಏಪ್ರಿಲ್‌ 2012ರಿಂದ ಮಾರ್ಚ್‌ 2013ರ ಅವಧಿಯಲ್ಲಿ 42 ಲಿವ್‌-ಇನ್‌ ಜೋಡಿಗಳು ಸಂಬಂಧ ಕಡಿದುಕೊಂಡಿವೆ. ಅಂದರೆ, ಪ್ರತಿ ತಿಂಗಳು ಸರಾಸರಿ 6 ಜೋಡಿಗಳು ಲಿವ್‌-ಇನ್‌ ಸಂಬಂಧಗಳನ್ನು ಮುರಿದುಕೊಳ್ಳುತ್ತಿವೆ.

ಆಧುನಿಕತೆಯೆಂಬ ‘ಆದರ್ಶ’ದ ಬಲೆಯೊಳಗೆ

Image
- ರಮೇಶ್ ‌ ನಿಂಬೆಮರದಹಳ್ಳಿ ಬ್ಲರ್ಬ್ ‌: ಫೀಡಮ್ ‌, ಪ್ರೈವೆಸಿ , ಐಡೆಂಟಿಟಿ , ಸೆಲ್ಫ್ ‌ ರೆಸ್ಪೆಕ್ಟ್ ‌ ಮೇಲ್ನೋಟಕ್ಕೆ ಆದರ್ಶ ಮೌಲ್ಯಗಳಂತೆ ಕಂಡರೂ ಭಾರತೀಯರಿಗೆ ಅಪಾಯಕಾರಿ ಎಂಬುದನ್ನು ಇವತ್ತಿನ ವಿದ್ಯಾಮಾನಗಳೇ ಸಾಕ್ಷೀಕರಿಸುತ್ತವೆ . ಈ ಪರಿಕಲ್ಪನೆಗಳನ್ನು ಸೃಜಿಸಿದ ಪಾಶ್ಚಾತ್ಯ ಚಿಂತನೆಯೇ ಇವುಗಳಿಗೆ ವಿರುದ್ಧವಾದ ಫೇಸ್ ‌ ಬುಕ್ ‌ ಅನ್ನೂ ಸೃಷ್ಠಿಸಿದೆ .   ಈ ಯಾವ ಕಲ್ಪನೆ ಗಳಿಗೆ ಭಾರತೀಯ ಸಂಸ್ಕೃತಿಯಲ್ಲಿ ಅರ್ಥವಿ ಲ್ಲ . ನಮ್ಮ ಸಂಸ್ಕೃತಿಗೆ ಒಗ್ಗದ , ಸಲ್ಲದ ಪರಿಕಲ್ಪನೆಗಳಿಗೆ ತಮ್ಮನ್ನು ತಾವು ಒಡ್ಡಿಕೊಂಡು ಸಂಘರ್ಷದಲ್ಲಿ ಬದುಕು ಸವೆಸುತ್ತಿ ದ್ದೇವೆ . ------------------------------------- ಈ ಕಾಲಘಟ್ಟದ ಯುವ ಜನತೆಯನ್ನು ನೋಡಿದರೆ ದೇಶದ ಭವಿಷ್ಯದ ಬಗ್ಗೆ ಆತಂಕವಾಗಲಾರದೇ ಇರದು . ಒಂದು ಕಡೆ ಚುರುಕು , ಕೌಶಲ್ಯ , ಬುದ್ಧಿಮತ್ತೆಯಲ್ಲಿ ವಯಸ್ಸಿನ ಹಂಗಿಲ್ಲದೆ ಬೆಳೆಯುತ್ತಿದ್ದಾರೆ , ಮತ್ತೊಂದು ಕಡೆ ಅಶಿಸ್ತು ಅವರ ಬದುಕಿನ ಮೌಲ್ಯವಾಗುತ್ತಿದೆ ; ತಾಳ್ಮೆ ಎಂಬ ಪದ ಕ್ಕೆ ಇವರ ಬಳಿ ಅರ್ಥವೇ ಇಲ್ಲ ; ಇವ ದ ರೇನಿದ್ದರೂ ಸೂಪರ್ ‌ ಸಾನಿಕ್ ‌ ವೇಗ . ಎಲ್ಲವೂ ಕಣ್ರೆಪ್ಪೆ ಬಡಿಯುವಷ್ಟರಲ್ಲಿ ಆಗಿ ಬಿಡಬೇಕು ಎನ್ನುವ ಧಾವಂತ . ನೈತಿಕತೆ ಎನ್ನುವುದನ್ನು ಹಳೆಯ ಕಾಲದ ಗುಜರಿ ವಸ್ತು ಎಂಬಂ ತಾಗಿದ್ದು , ಯಾರಿಗೂ ಬೇಡವಾದ ವಿಚಾರವ...